ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಿಟಿ ರವಿ ವಿರುದ್ಧ ಸಭಾಪತಿ ಮತ್ತು ಪೊಲೀಸರಿಗೆ ದೂರು ನೀಡಿದಾಗಲೇ ಅವರ ಬಂಧನ ಹೆಚ್ಚು ಕಡಿಮೆ ಖಚಿತವಾಗಿತ್ತು. ಬೆಳಗಾವಿಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ರವಿ ಬಳಸಿದ ಪದ ಕ್ರಿಮಿನಲ್ ಅಫೆನ್ಸ್ ಅನಿಸಿಕೊಳ್ಳುತ್ತದೆ ಅಂತ ಹೇಳಿದ್ದರು. ಮಾತಾಡುವಾಗ ಎಚ್ಚರತಪ್ಪದ ರವಿ ಅದ್ಯಾಕೆ ಈ ಬಾರಿ ಜನರ ನಿರೀಕ್ಷೆಗೆ ವಿರುದ್ಧ ಹೋದರು ಅನ್ನೋದೇ ಯಕ್ಷಪ್ರಶ್ನೆ.