ಗೃಹ ಸಚಿವ ಜಿ ಪರಮೇಶ್ವರ್

ಪ್ರಿಯಾಂಕಾ ಗಾಂಧಿ ಒಂದು ಪಕ್ಷ ಕರ್ನಾಟಕದಿಂದ ಸ್ಪರ್ಧಿಸಿದ್ದೇಯಾದರೆ, ಹಾಗೆ ಮಾಡಿದ ನೆಹರೂ ಮನೆತನದ ಮೂರನೇ ಮಹಿಳೆಯೆನಿಸಿಕೊಳ್ಳಲಿದ್ದಾರೆ. 1978 ರಲ್ಲಿ ದಿವಂಗತ ಇಂದಿರಾ ಗಾಂಧಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಜನತಾ ಪಕ್ಷದ ದಿವಂಗತ ವೀರೇಂದ್ರ ಪಾಟೀಲ್ ವಿರುದ್ಧ ಸ್ಪರ್ಧಿಸಿ ಗೆದ್ದಿದ್ದರು. ನಂತರ ಸೋನಿಯಾ ಗಾಂಧಿ 1999 ರ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಿಂದ ದಿವಂಗತ ಸುಷ್ಮಾ ಸ್ವರಾಜ್ ವಿರುದ್ಧ ಗೆದ್ದು ಸಂಸತ್ತಿಗೆ ಆಯ್ಕೆಯಾಗಿದ್ದರು.