ನಟ ಕಿಚ್ಚ ಸುದೀಪ್ ಮತ್ತು ನಿರ್ಮಾಪಕ ಎಂಎನ್ ಕುಮಾರ್ ನಡುವಿನ ವಿವಾದವನ್ನು ಬಗೆಹರಿಸಲು ಕನ್ನಡ ಚಿತ್ರರಂಗದ ಹಿರಿಯ ನಟರ ಮಧ್ಯಪ್ರವೇಶ ಆಗಿದೆ. ಈ ವಿಚಾರದಲ್ಲಿ ಶಿವರಾಜ್ಕುಮಾರ್ ಅವರಿಗೆ ಮೊದಲು ಲೆಟರ್ ನೀಡಿ ಎಂದು ರವಿಚಂದ್ರನ್ ಹೇಳಿದ್ದರು. ಅವರ ಮಾತಿಗೆ ಇಂದು (ಜುಲೈ 19) ಶಿವರಾಜ್ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ‘ರವಿ ಅವರು ಆ ರೀತಿ ಹೇಳಿದ್ದು ಅವರ ದೊಡ್ಡತನ. ಅವರು ನನಗಿಂತ ಸೀನಿಯರ್. ಅವರ ತಂದೆ ದೊಡ್ಡ ಪ್ರೊಡ್ಯೂಸರ್ ಆಗಿದ್ದರು. ಅವರಿಗೆ ಅಪ್ಪಾಜಿ ಸಾಹುಕಾರರು ಎನ್ನುತ್ತಿದ್ದರು. ಈಗ ನಾನು ರವಿ ಸರ್ ಅವರ ಸಲಹೆ ಕೇಳುತ್ತೇನೆ’ ಎಂದು ಶಿವಣ್ಣ ಹೇಳಿದ್ದಾರೆ.