ಗುತ್ತಿಗೆದಾರನ ದ್ವಿಚಕ್ರವಾಹನ ಹಾಸನದ ಬಸ್​ ನಿಲ್ದಾಣದ ಬಳಿ ಪತ್ತೆ

ಹಂತಕರಿಬ್ಬರು ಬಿಹಾರ ಮೂಲದವರು ಅಂತ ಗೊತ್ತಾಗಿದೆ. ಅಸಲಿಗೆ ಅವರಲ್ಲೊಬ್ಬ ರಾತ್ರಿ ವಿಜಯ್​ಗೆ ಫೋನ್ ಮಾಡಿ ಮತ್ತೊಬ್ಬನಿಗೆ ಹುಷಾರಿಲ್ಲ ವಿಚಿತ್ರವಾಗಿ ಆಡುತ್ತಿದ್ದಾನೆ ಅಂತ ಹೇಳಿ ಕರೆಸಿಕೊಂಡಿದ್ದಾನೆ. ಅವರು ಅಲ್ಲಿಗೆ ಬಂದಾಗ ಹಿಂದಿನಿಂದ ದಾಳಿ ನಡೆಸಿ ಕೊಂದಿದ್ದಾರೆ. ಬೆರಳಲ್ಲಿದ್ದ ಉಂಗುರ ತೆಗೆಯಲು ಬಾರದೆ ಹೋದಾಗ ಬೆರಳನ್ನೇ ಕತ್ತರಿಸಿದ್ದಾರೆ! ವಿಜಯ್ ಅವರ ವಾಹನ ಬಸ್ ನಿಲ್ದಾಣದ ಬಳಿ ಸಿಕ್ಕಿದೆ.