ಹಂತಕರಿಬ್ಬರು ಬಿಹಾರ ಮೂಲದವರು ಅಂತ ಗೊತ್ತಾಗಿದೆ. ಅಸಲಿಗೆ ಅವರಲ್ಲೊಬ್ಬ ರಾತ್ರಿ ವಿಜಯ್ಗೆ ಫೋನ್ ಮಾಡಿ ಮತ್ತೊಬ್ಬನಿಗೆ ಹುಷಾರಿಲ್ಲ ವಿಚಿತ್ರವಾಗಿ ಆಡುತ್ತಿದ್ದಾನೆ ಅಂತ ಹೇಳಿ ಕರೆಸಿಕೊಂಡಿದ್ದಾನೆ. ಅವರು ಅಲ್ಲಿಗೆ ಬಂದಾಗ ಹಿಂದಿನಿಂದ ದಾಳಿ ನಡೆಸಿ ಕೊಂದಿದ್ದಾರೆ. ಬೆರಳಲ್ಲಿದ್ದ ಉಂಗುರ ತೆಗೆಯಲು ಬಾರದೆ ಹೋದಾಗ ಬೆರಳನ್ನೇ ಕತ್ತರಿಸಿದ್ದಾರೆ! ವಿಜಯ್ ಅವರ ವಾಹನ ಬಸ್ ನಿಲ್ದಾಣದ ಬಳಿ ಸಿಕ್ಕಿದೆ.