ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಆಗಿನ ಅಡ್ವೋಕೇಟ್ ಜನರಲ್ ಪ್ರಭು ನಾವದಗಿ ಅವರ ವರದಿಯನ್ನು ಆದರಿಸಿ ಡಿಕೆ ಶಿವಕುಮಾರ್ ಅವರು ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ಆ ಸರ್ಕಾರ ಆದೇಶಿಸಿತ್ತು. ಈಗ ಅಡ್ವೋಕೇಟ್ ಜನರಲ್ ಆಗಿರುವ ಶಶಿಕಿರಣ್ ಶೆಟ್ಟಿ ವರದಿ ಆಧರಿಸಿ ಕಾಂಗ್ರೆಸ್ ಸರ್ಕಾರ ತನಿಖೆ ಆದೇಶವನ್ನು ವಾಪಸ್ಸು ಪಡೆದಿದೆ.