ಇಂದು ಹಾಸನ ಚನ್ನಂಗಿಹಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡುವಾಗ ಕುಮಾರಸ್ವಾಮಿಯವರು ಪ್ರೀತಂ ಬಗ್ಗೆ ಅನುನಯದ ಸ್ವರದಲ್ಲಿ ಮಾತಾಡಿದರು. ಅವರಿನ್ನೂ ಯುವಕ, ಯಾರೋ ಅವರು ತಲೆ ತುಂಬುತ್ತಿದ್ದಾರೆ, ಬಿಸಿರಕ್ತದ ಆವೇಶದಲ್ಲಿ ಮಾತಾಡುತ್ತಾರೆ, ಅವರು ತನಗೆ ಸಹೋದರನಂತೆ ಎಂದು ಕುಮಾರಸ್ವಾಮಿ ಹೇಳಿದರು.