ಹೆಚ್ ಡಿ ಕುಮಾರಸ್ವಾಮಿ ಮತ್ತು ಪ್ರೀತಂ ಜೆ ಗೌಡ

ಇಂದು ಹಾಸನ ಚನ್ನಂಗಿಹಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡುವಾಗ ಕುಮಾರಸ್ವಾಮಿಯವರು ಪ್ರೀತಂ ಬಗ್ಗೆ ಅನುನಯದ ಸ್ವರದಲ್ಲಿ ಮಾತಾಡಿದರು. ಅವರಿನ್ನೂ ಯುವಕ, ಯಾರೋ ಅವರು ತಲೆ ತುಂಬುತ್ತಿದ್ದಾರೆ, ಬಿಸಿರಕ್ತದ ಆವೇಶದಲ್ಲಿ ಮಾತಾಡುತ್ತಾರೆ, ಅವರು ತನಗೆ ಸಹೋದರನಂತೆ ಎಂದು ಕುಮಾರಸ್ವಾಮಿ ಹೇಳಿದರು.