ವರದಕ್ಷಿಣೆಯ ಕಿರುಕುಳ ಆರಂಭಿಸಿದ್ದು ಮತ್ತು ತನ್ನ ಗಂಡ ಹಾಗೂ ಅತ್ತೆ ಮಾವನ ತಲೆ ತುಂಬಿದ್ದು ತಿಪ್ಪೇಸ್ವಾಮಿ ಎಂದು ಯುವತಿ ಹೇಳುತ್ತಾರೆ. ಆಕೆ ಗರ್ಭವತಿಯಾದಾಗ ಲಿಂಗ ಪರೀಕ್ಷೆ ಮಾಡಿಸಿ ಅದು ಹೆಣ್ಣು ಮಗು ಅಂತ ಗೊತ್ತಾಗಿ ಗರ್ಭಪಾತವನ್ನೂ ಗಂಡನ ಮನೆಯವರು ಮಾಡಿಸಿರುವರೆಂಬ ಗಂಭೀರ ಆರೋಪ ಅವರು ಮಾಡುತ್ತಾರೆ. ಸದ್ಯಕ್ಕೆ ಅವರು ಗಂಡನ ಮನೆ ಮುಂದೆ ಧರಣಿ ಕೂತು ನ್ಯಾಯ ಕೇಳುತ್ತಿದ್ದಾರೆ.