ಸಿಎಂ ಇಬ್ರಾಹಿಂ, ಹಿರಿಯ ರಾಜಕಾರಣಿ

ಇಂದು ನಗರದಲ್ಲಿ ಪತ್ರಿಕಾ ಗೋಷ್ಟಿ ನಡೆಸಿ ಮಾತಾಡಿದ ಅವರು, ಕಾಂಗ್ರೆಸ್ ಗೆ ವಾಪಸ್ಸಾಗುವ ಬಗ್ಗೆ ಇಂಗಿತ ವ್ಯಕ್ತಪಡಿಸಿದರು. ಪಕ್ಷದ ಹೈಕಮಾಂಡ್ ನ ಕೆಲವರು ತಮ್ಮೊಂದಿಗೆ ಮಾತಾಡಿದ್ದಾರೆ ಆದರೆ ತಾವಿನ್ನೂ ರಾಜ್ಯದ ನಾಯಕರ ಜೊತೆ ಚರ್ಚೆ ಮಾಡಿಲ್ಲ ಅಂತ ಅವರು ಹೇಳಿದರು. ಕುಮಾರಸ್ವಾಮಿಯ ನಡೆಯಿಂದ ಅವರಲ್ಲಿ ವೈರಾಗ್ಯದ ಭಾವವೂ ಮೂಡಿದೆ. ರಾಜಕೀಯದಲ್ಲಿ ಮುಂದುವರಿಯಬೇಕೋ ಇಲ್ಲವೋ ಅಂತ ಗೊಂದಲವುಂಟಾಗಿದೆ ಅಂತ ಅವರು ಹೇಳುವುದನ್ನು ಕೇಳಬಹುದು.