ಹಾಸನ ನಗರದ ಶ್ರೀಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಸಂಭ್ರಮ ಮನೆಮಾಡಿತ್ತು. ಮದುವೆಗೆ ಬಂದವರೆಲ್ಲ ಖುಷಿ ಖುಷಿಯಿಂದ ಓಡಾಡಿಕೊಂಡಿದ್ದರು. ಪುರೋಹಿತರು, ‘‘ಮಾಂಗಲ್ಯಂ ತಂತುನಾನೇನಾ’’ ಎನ್ನಲು ಸಿದ್ಧವಾಗಿದ್ದರು. ವರ ಇನ್ನೇನು ತಾಳಿ ಕಟ್ಟಬೇಕಷ್ಟೇ, ಹುಡುಗಿಗೆ ಅದೇನಾಯ್ತೋ ಗೊತ್ತಿಲ್ಲ. ನನಗೆ ಈ ಮದುವೆ ಬೇಡ ಅಂತ ಕಡ್ಡಿಮುರಿದಂತೆ ತಲೆ ಅಲ್ಲಾಡಿಸಿದಳು. ಈ ಬಗ್ಗೆ ಸಂಬಂಧಿಕರು ಹೇಳಿದ್ದೇನು ನೋಡಿ.