ಸರ್ಕಾರದ ಕೆಲಸಗಳನ್ನು ಮಾಧ್ಯಮಗಳಿಗೆ ತೋರಿಸುತ್ತೇನೆ ಎಂದ ಶಿವಕುಮಾರ್

ಎತ್ತಿನ ಹೊಳೆ ಯೋಜನೆ ಅಡಿ ಒಟ್ಟು 24 ಟಿಎಂಸಿ ನೀರು ಸಿಗಲಿದೆ ಎಂದು ಶಿವಕುಮಾರ್ ಹೇಳುತ್ತಾರಾದರೂ ಅವರು ನೀಡುವ ಲೆಕ್ಕ 22 ಟಿಎಂಸಿಗೆ ಬರುತ್ತೆ-14 ಟಿಎಂಸಿ ಕುಡಿಯಲು ಮತ್ತು 8ಟಿಎಂಸಿ ನೀರು ಕೆರೆ ತುಂಬಿಸಲು. ಅವರ ಉತ್ತರದಿಂದ ಕನ್ವಿನ್ಸ್ ಆಗದ ಪತ್ರಕರ್ತರು ಮತ್ತದೇ ಪ್ರಶ್ನೆ ಕೇಳಿದಾಗ, ನಿಮ್ಮ ಪ್ರಶ್ನೆ ಅರ್ಥವಾಗುತ್ತಿಲ್ಲ, ನೋಡಿಕೊಂಡು ಹೇಳುತ್ತೇನೆ ಎಂದು ನೀರಾವರಿ ಸಚಿವ ಹೇಳುತ್ತಾರೆ.