ಕಿಚ್ಚ ಸುದೀಪ್ ಅವರು ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದ ಟ್ರೇಲರ್ ರಿಲೀಸ್ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಡಾರ್ಲಿಂಗ್ ಕೃಷ್ಣ ಅವರ ನಟನೆಯ ಈ ಚಿತ್ರಕ್ಕೆ ಶಶಾಂಕ್ ಅವರು ನಿರ್ದೇಶನ ಮಾಡಿದ್ದಾರೆ. ವೇದಿಕೆ ಏರಿದ ಎಲ್ಲರೂ ಸುದೀಪ್ಗೆ ಹಿರಿಯ ನಟ ಎಂದು ಸಂಭೋದಿಸಿದರು. ಇದು ಸುದೀಪ್ಗೆ ಇಷ್ಟವಾಗಿಲ್ಲ. ಸಖತ್ ಫನ್ನಿ ಆಗಿಯೇ ಅವರು ಈ ಬಗ್ಗೆ ಹೇಳಿಕೊಂಡಿದ್ದಾರೆ. ‘ವೇದಿಕೆ ಏರಿದ ಎಲ್ಲರೂ ನನಗೆ ಹಿರಿಯ ನಟ ಎಂದರು. ನಾನಿನ್ನೂ ಲವ್ ಸ್ಟೋರಿ ಸಿನಿಮಾ ಮಾಡುತ್ತಿದ್ದೇನೆ. ದಯವಿಟ್ಟು ಹಿರಿಯ ನಟ ಎನ್ನಬೇಡಿ’ ಎಂದು ಸುದೀಪ್ ಕೋರಿದ್ದಾರೆ.