ಈ ಬಾರಿಯೂ ಅವರಿಗೆ ಟಿಕೆಟ್ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಮನವಿ ಮಾಡಿರುವುದಾಗಿ ವಿಜಯಾನಂದ ಹೇಳಿದರು. ಕಳೆದ ಬಾರಿ ಸೋಲು ಅನುಭವಿಸಿದರೂ ವೀಣಾ ಎದೆಗುಂದಿಲ್ಲ, ಬಾಗಲಕೋಟೆ ಲೋಕ ಸಭಾ ಕ್ಷೇತ್ರದ ಎಲ್ಲ 8 ಮತಕ್ಷೇತ್ರಗಳಿಗೆ ಭೇಟಿ ನೀಡುತ್ತಾ ಜನರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿದ್ದಾರೆ ಎಂದು ವಿಜಯಾನಂದ ಹೇಳಿದರು