ಚನ್ನಪಟ್ಟಣವನ್ನು ಅಭಿವೃದ್ಧಿ ಮಾಡುವ ಅಜೆಂಡಾದೊಂದಿಗೆ ಗೆದ್ದಿರುವ ಯೋಗೇಶ್ವರ್ ಎದುರು ಹಲವಾರು ಸವಾಲುಗಳಿವೆ. ಪಟ್ಟಣದ ಬಸ್ ನಿಲ್ದಾಣವನ್ನು ನವೀಕರಿಸುವ ಬಗ್ಗೆ ಅವರೇ ಪ್ರಚಾರದಲ್ಲಿ ಹೇಳಿಕೊಂಡಿದ್ದರು. ಅಧಿಕಾರದಲ್ಲಿ ಅವರದ್ದೇ ಸರ್ಕಾರ ಇರುವುದರಿಂದ ಮತ್ತು ಕ್ಷೇತ್ರದ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ವಿಶೇಷ ಆಸ್ಥೆ ವಹಿಸಿರುವುದರಿಂದ ಜನರಲ್ಲಿ ಸಹಜವಾಗೇ ನಿರೀಕ್ಷೆ ಹುಟ್ಟಿಕೊಂಡಿವೆ.