ರಕ್ಷಣಾ ತಂಡದ ಸದಸ್ಯರಿಗೆ ಸನ್ಮಾನ

ಸಾತ್ವಿಕ್ ನನ್ನು ರಕ್ಷಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ರೀಯಲ್ ಲೈಫ್ ಹೀರೊಗಳನ್ನು ವಿಜಯಪುರ ಜಿಲ್ಲಾಡಳಿತ ಸನ್ಮಾನಿಸಿತು. ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಜಿಲ್ಲಾಧಿಕಾರಿ ಟಿ ಭೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಭಾಗವಾನ್ ಸೋನುವಾಣೆ ರಕ್ಷಣಾ ತಂಡಗಳ ಸದಸ್ಯರನ್ನು ಶಾಲು ಹೊದೆಸಿ ಸತ್ಕರಿಸಿದರು.