ಮುಡಾದಿಂದಲೇ ತಪ್ಪು ನಡೆದಿರೋದು, ಹಾಗಾಗಿ ತನಗೆ ಆ 14 ಸೈಟುಗಳು ಬೇಡ, ಅದರ ಬದಲಿಗೆ ₹ 62 ಕೋಟಿ ಕೊಡಲಿ ಎಂದು ಮುಖ್ಯಮಂತ್ರಿ ಹೇಳಿರುವುದನ್ನು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಮತ್ತೊಮ್ಮೆ ಗೇಲಿ ಮಾಡಿದರು. ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಕೇಂದ್ರಿತ ಮುಡಾ ಹಗರಣ ಮತ್ತಷ್ಟು ಕಾವು ಪಡೆದುಕೊಳ್ಳಲಿರುವುದಂತೂ ನಿಶ್ಚಿತ. ವಿಧಾನಸಭಾ ಅಧಿವೇಶನದಲ್ಲಿ ಇದು ಪ್ರಮುಖ ಚರ್ಚೆಯ ವಿಷಯವಾಗಲಿದೆ.