ಜೋರು ಜೋರಾಗಿ ಜಗಳ ಮಾಡುವುದನ್ನೇ ಬಿಗ್ ಬಾಸ್ ಆಟ ಎಂದುಕೊಂಡಂತಿದೆ ಚೈತ್ರಾ ಕುಂದಾಪುರ. ದೊಡ್ಮನೆಯಲ್ಲಿ ಅವರ ವಿರುದ್ಧ ಅನೇಕರು ತಿರುಗಿ ಬಿದ್ದಿದ್ದಾರೆ. ರಜತ್ ಅವರಿಗೆ ಚೈತ್ರಾ ಅವರನ್ನು ಕಂಡರೆ ಆಗುವುದೇ ಇಲ್ಲ. ಕ್ಯಾಪ್ಟೆನ್ಸಿ ಟಾಸ್ಕ್ನಿಂದ ಚೈತ್ರಾ ಅವರನ್ನು ರಜತ್ ಹೊರಗೆ ಇಟ್ಟಿದ್ದಾರೆ. ಹಾಗಾಗಿ ಚೈತ್ರಾ ಜಗಳ ಮಾಡಿದ್ದಾರೆ. ಕೋಪಗೊಂಡ ರಜತ್ ಅವರು, ‘ಅವಳಿಗೆ ದಿನದಿನವೂ ಹುಚ್ಚು ಜಾಸ್ತಿ ಆಗುತ್ತಿದೆ’ ಎಂದು ರಜತ್ ಹೇಳಿದ್ದಾರೆ. ‘ಹೌದು’ ಎಂದು ತ್ರಿವಿಕ್ರಮ್ ಧ್ವನಿಗೂಡಿಸಿದ್ದಾರೆ.