ಪ್ರತಿ ದಿನವೂ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಶೋನಲ್ಲಿ ಹೊಸ ಹೊಸ ಟ್ವಿಸ್ಟ್ ಸಿಗುತ್ತಿದೆ. ಇಷ್ಟು ದಿನಗಳ ಕಾಲ ಸಂಗೀತಾ ಶೃಂಗೇರಿ ಮತ್ತು ಕಾರ್ತಿಕ್ ಮಹೇಶ್ ಮಧ್ಯೆ ಒಂದು ಒಡನಾಟ ಬೆಳೆದಿತ್ತು. ಇಬ್ಬರ ನಡುವೆ ನಂಬಿಕೆ ಇತ್ತು. ಆದರೆ ಈಗ ಆ ನಂಬಿಕೆಗೆ ಪೆಟ್ಟು ಬಿದ್ದಂತಿದೆ. ನಾಮಿನೇಷನ್ ವಿಚಾರದಲ್ಲಿ ಸಂಗೀತಾ ಶೃಂಗೇರಿ ಅವರ ಬೆನ್ನ ಹಿಂದೆ ಸಂಚು ನಡೆದಿದೆ. ಅವರನ್ನು ಸೇವ್ ಮಾಡಬಾರದು ಎಂದು ಕೆಲವರು ಹುನ್ನಾರ ನಡೆಸಿದ್ದಾರೆ. ಅದು ಸಂಗೀತಾ ಗಮನಕ್ಕೆ ಬಂದಿದೆ. ಈ ವಿಚಾರವನ್ನು ಮುಂದಿಟ್ಟುಕೊಂಡು ಅವರು ನೇರವಾಗಿ ಪ್ರಶ್ನೆ ಮಾಡಿದ್ದಾರೆ. ಕಾರ್ತಿಕ್ ಮಹೇಶ್, ವರ್ತೂರು ಸಂತೋಷ್, ತನಿಷಾ ಕುಪ್ಪಂಡ ಅವರ ಬಳಿ ಇದನ್ನು ಸಂಗೀತಾ ಚರ್ಚಿಸಿದ್ದಾರೆ. ‘ಇಷ್ಟು ದಿನ ನಮ್ಮಲ್ಲಿ ಒಂದು ಫ್ರೆಂಡ್ಶಿಪ್, ನಂಬಿಕೆ ಇತ್ತು. ಅದು ಈಗ ಬ್ರೇಕ್ ಆಗಿದೆ’ ಎಂದು ಸಂಗೀತಾ ಮುಲಾಜಿಲ್ಲದೇ ಹೇಳಿದ್ದಾರೆ. ನ.16ರ ರಾತ್ರಿ 9.30ಕ್ಕೆ ‘ಕಲರ್ಸ್ ಕನ್ನಡ’ದಲ್ಲಿ ಈ ಸಂಚಿಕೆ ಪ್ರಸಾರ ಆಗಲಿದೆ. ‘ಜಿಯೋ ಸಿನಿಮಾ’ ಮೂಲಕ 24 ಗಂಟೆಯೂ ಲೈವ್ ನೋಡಬಹುದು.