ಹೆಚ್ ಡಿ ಕುಮಾರಸ್ವಾಮಿ

Bomb Threat Mails: ಜನರು ಭಯದಿಂದ ಜೀವಿಸುವಂಥ ಕೃತಕ ವಾತಾವರಣವನ್ನು ಸೃಷ್ಟಿ ಮಾಡಲು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಪ್ರಯತ್ನಿಸುತ್ತಿವೆ ಅಂತ ಕುಮಾರಸ್ವಾಮಿ ಯಾವ ಅರ್ಥದಲ್ಲಿ ಹೇಳಿದರು ಅನ್ನೋದು ಪ್ರಾಯಶಃ ಕನ್ನಡಿಗರಿಗೆ ಅರ್ಥವಾಗಲಿಕ್ಕಿಲ್ಲ. ಯಾವುದೋ ಸಂಸ್ಥೆಯವ ಮೇಲ್ ಗಳನ್ನು ಕಳಿಸಿದ್ದಾನೆ ಅಂತ ಅವರೇ ಹೇಳುತ್ತಾರೆ. ಬಾಂಬ್ ಬೆದರಿಕೆಯ ಹುಸಿಮೇಲ್ ಗಳ ಹಿನ್ನೆಲೆಯಲ್ಲಿ ಅವರು ಕೃತಕ ಅಂತ ಹೇಳಿದ್ದರೆ, ಸರ್ಕಾರವನ್ನು ಕಟಕಟೆಯಲ್ಲಿ ನಿಲ್ಲಿಸುವ ಅವರ ಉದ್ದೇಶವಾದರೂ ಏನು?