ವಾಲ್ಮೀಕಿ ನಿಗಮ ಪ್ರಕರಣದಲ್ಲಿ ಸರ್ಕಾರ ಸಮಗ್ರ ತನಿಖೆ ಮಾಡಿಸಿದೆ: ಗೃಹ ಸಚಿವ

ನಿನ್ನೆ ಬಳ್ಳಾರಿಯಲ್ಲಿ ಶಾಸಕರು ಮತ್ತು ಸಂಸದರ ಮನೆಗಳ ಈಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದನ್ನು ಗೃಹ ಸಚಿವ ಅದೊಂದು ಮಾಮೂಲೀ ವಿಷಯವೆಂಬಂತೆ ಮಾತಾಡಿದರು. ರಾಜ್ಯ ಸರ್ಕಾರ ಎಸ್​ಐಟಿಯನ್ನು ರಚಿಸಿ ತನಿಖೆ ಮಾಡಿಸಿದೆ, ಚಾರ್ಜ್​ಶೀಟ್ ಸಲ್ಲಿಕೆಯ ಜೊತೆ ಹಣವನ್ನು ಸಹ ಸಂಪೂರ್ಣವಾಗಿ ರಿಕವರಿ ಮಾಡಲಾಗಿದೆ, ಈಡಿ ಅಧಿಕಾರಿಗಳಿಗೆ ಮತ್ಯಾವ ಮಾಹಿತಿ ಇದೆಯೋ ಗೊತ್ತಿಲ್ಲ ಎಂದು ಅವರು ಹೇಳಿದರು.