ಸಚಿವ ಪ್ರಿಯಾಂಕ್ ಖರ್ಗೆ

ಈಶ್ವರಪ್ಪ ಅವರಿಗೆ ಆರಾಮವಾಗಿ ವಿಶ್ರಾಂತಿ ಜೀವನ ನಡೆಸುವ ವಯಸ್ಸು, ಬೆಳಗಿನ ಹೊತ್ತು ರಾಮಾಯಣ ನೋಡುತ್ತಾ, ಮಧ್ಯಾಹ್ನ ಕೀರ್ತನೆ ಕೇಳುತ್ತಾ ಮತ್ತು ರಾತ್ರಿ ಹನುಮಾನ ಚಾಲೀಸ ಜಪಿಸುತ್ತಾ ಬದುಕು ನಡೆಸುವ ಸಮಯ, ಅದನ್ನು ಬಿಟ್ಟು ಅವರು ಅತಿರೇಕದ ಹೇಳಿಕೆಗಳನ್ನು ನೀಡುತ್ತಾ ಸುದ್ದಿಯಲ್ಲಿರುವ ಪ್ರಯತ್ನ ಮಾಡುತ್ತಿರುತ್ತಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.