ಯಶ್ ಹಾಗೂ ಅವರ ಪತ್ನಿ ರಾಧಿಕಾ ಪಂಡಿತ್ ಅವರು ಮೈಸೂರಿನ ನಂಜನಗೂಡಿಗೆ ಭೇಟಿ ನೀಡಿದ್ದಾರೆ. ಮಕ್ಕಳಾದ ಆಯ್ರಾ ಯಶ್ ಹಾಗೂ ಯಥರ್ವ್ ಯಶ್ ಜೊತೆ ಬಂದು ಅವರು ಶ್ರೀಕಂಠೇಶ್ವರನ ದರ್ಶನ ಪಡೆದಿದ್ದಾರೆ. ಆರತಿ ತೆಗೆದುಕೊಂಡ ಬಳಿಕ ಅರ್ಚಕರ ತಟ್ಟೆಗೆ ದಕ್ಷಿಣೆ ಹಾಕುವಾಗ ಆಯ್ರಾ ಎಡಗೈ ಬಳಸಿದಳು. ಆಗ ಮಗಳಿಗೆ ಯಶ್ ಅವರು ಪ್ರೀತಿಯಿಂದ ತಿಳಿಹೇಳಿದರು. ‘ರೈಟ್ ಹ್ಯಾಂಡ್ನಲ್ಲಿ ಹಾಕಬೇಕು ಮಗಳೇ..’ ಎಂದು ಅವರು ಬುದ್ಧಿ ಹೇಳಿದರು.