ಮೂರು ತಂಡಗಳು ಒಟ್ಟಿಗೆ ಹೋರಾಟ ನಡೆಸದೆ ಬೇರೆ ಬೇರೆ ದಿಕ್ಕಿಗೆ ತೆರಳಿ ಜನ ಜಾಗೃತಿ ಮೂಡಿಸುತ್ತವೆ ಎಂದು ಪ್ರೀತಂ ಗೌಡ ಹೇಳುತ್ತಾರೆ. ಆಂತರಿಕ ಸಭೆಗೆ ಯತ್ನಾಳ್ ಅವರನ್ನು ಕರೆಯಲಾಗಿತ್ತೇ ಎಂದು ಮಾಧ್ಯಮದವರು ಕೇಳುವ ಪ್ರಶ್ನೆಗೆ ಪ್ರೀತಂ ಗೌಡ, ಯಾರಿಗೆಲ್ಲ ವಿಷಯ ತಿಳಿಸಬೇಕಾಗಿತ್ತೋ ಅವರಿಗೆ ಫೋನಲ್ಲಿ ತಿಳಿಸಲಾಗಿದೆ ಎಂದು ಹೇಳಿದರು.