ಆ ದತ್ತಾಂಶದ ಆಧಾರದ ಮೇಲೆಯೇ ತಮ್ಮ ಆಯೋಗ ಜಾತಿಗಣತಿ ವರದಿಯನ್ನು ತಯಾರಿಸಿ ಸರ್ಕಾರಕ್ಕೆ ನೀಡಲಿದೆ ಎಂದು ಹೇಳಿದ ಅವರು ತಾವು ಸರ್ಕಾರಕ್ಕೆ ಸಲ್ಲಿಸಲಿರುವ ವರದಿಯೇ ಮೂಲಪ್ರತಿ ಅನಿಸಿಕೊಳ್ಳುತ್ತದೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅದನ್ನು ಡಿಸೆಂಬರ್-ಜನೆವರಿ ಒಳಗೆ ಸಲ್ಲಿಸಲು ಹೇಳಿದ್ದು ಅಷ್ಟರೊಳಗೆ ಸಲ್ಲಿಸಲಾಗುವುದು ಎಂದು ಜಯಪ್ರಕಾಶ್ ಹೆಗ್ಡೆ ಹೇಳಿದರು.