ರಾಜ್ಯಾದ್ಯಂತ ಓಡಾಡಿ ಜನಾಭಿಪ್ರಾಯ ಸಂಗ್ರಹಿಸಿ ಹೊಸ ಪಾರ್ಟಿ ಕಟ್ತೀನಿ ಅಂತ ಯತ್ನಾಳ್ ಹೇಳುತ್ತಾರೆ, ಇವರೇನಾದರೂ ಹೊಸ ಪಕ್ಷ ಕಟ್ಟಿದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಬೇಕಾಗಿವಷ್ಟು ಅಭ್ಯರ್ಥಿಗಳೂ ಸಿಗಲಾರರು, ದಾರಿಹೋಕರ ಕೈಕಾಲು ಹಿಡಿದು ಚುನಾವಣೆಗೆ ನಿಲ್ಲಿಸಬೇಕಾಗುತ್ತದೆ ಎಂದು ಅಪರೂಪಕ್ಕೆ ನಕ್ಕ ರೇಣುಕಾಚಾರ್ಯ ಹೇಳಿದರು.