ಎಂಎಲ್​ಸಿ ಕೇಶವ ಪ್ರಸಾದ್

ರಾತ್ರಿಯೆಲ್ಲ ರವಿಯವರೊಂದಿಗೆ ಕಾರಲ್ಲಿದ್ದ ಕೇಶವ ಪ್ರಸಾದ್ ತಾನು ಮತ್ತು ರವಿ ತಮ್ಮನ್ನು ಪಾಯಿಂಟ್ ಬ್ಲ್ಯಾಂಕ್ ರೇಂಜಲ್ಲಿ ಶೂಟ್ ಮಾಡುವಂತೆ ಪೊಲೀಸರಿಗೆ ಹೇಳಿದ್ದು ನಿಜವೆಂದರು. ತಮ್ಮನ್ನು ವಿನಾಕಾರಣ ಊರೂರು ಸುತ್ತಿಸುವ ಬದಲು ತಮ್ಮಿಂದ ದೇಶದ ಐಕ್ಯತೆಗೆ ಧಕ್ಕೆ ಇದೆ, ಸಮಾಜಕ್ಕೆ ಅಪಾಯವಿದೆ ಅಂತ ಪೊಲೀಸರಿಗೆ ಅನಿಸುತ್ತಿದ್ದರೆ ಶೂಟ್ ಮಾಡಿ ಕೊಂದು ಬಿಡಲಿ ಅಂತ ರಸ್ತೆಯಲ್ಲಿ ಕೂತು ಹೇಳಿದ್ದು ಸತ್ಯ ಎಂದು ಪ್ರಸಾದ್ ಹೇಳಿದರು.