ಹೋಟೆಲ್ ಮಾಲೀಕರಲ್ಲಿ ಗೊಂದಲ

ಸೆಪ್ಟೆಂಬರ್ 29 ರಂದು ಕರ್ನಾಟಕ ಬಂದ್ ಗೆ ಕರೆ ನೀಡಿರುವಿದರಿಂದ ಮತ್ತು ಅದರಲ್ಲಿ ಹೆಚ್ಚಿನ ಸಂಖ್ಯೆಯ ಸಂಘಟನೆಗಳು ಭಾಗಿಯಾಗಲಿರುವುದರಿಂದ ಕರ್ನಾಟಕ ಬಂದ್ ಗೆ ಬೆಂಬಲ ನೀಡುವುದು ಹೆಚ್ಚು ಸೂಕ್ತ ಅಂತ ಶೆಟ್ಟಿ ಹೇಳುತ್ತಾರೆ. ನಿರ್ದಿಷ್ಟವಾಗಿ ನಾಳಿನ ಬಂದ್ ಬಗ್ಗೆ ಹೋಟೆಲ್ ಮಾಲೀಕರ ನಿಲುವು ಏನು ಅಂತ ಕೇಳಿದರೆ ಈ ಪ್ರಶ್ನೆಗೆ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರೇ ಸರಿಯಾದ ಉತ್ತರ ನೀಡಬಲ್ಲರು ಎನ್ನುತ್ತಾರೆ.