ಡಿಕೆ ಶಿವಕುಮಾರ್, ಡಿಸಿಎಂ

ಇದೇನು ಸಾರ್ ಕೇವಲ ಮಂತ್ರಿಗಳ ಮಕ್ಕಳಿಗೆ ಮಾತ್ರ ಟಿಕೆಟ್ ಕೊಡ್ತಾ ಇದ್ದೀರಿ, ಪಕ್ಷಕ್ಕಾಗಿ ಬೆವರು ಸುರಿಸಿ ದುಡಿಯುವ ಕಾರ್ಯಕರ್ತರ ಪಾಡೇನು ಅಂತ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಕೇಳಿದರೆ, ಅವರು ಡಿಪ್ಲೋಮ್ಯಾಟಿಕ್ ಆಗಿ ಏನೇನೋ ಹೇಳುತ್ತಾರೆ. ಅವರ 40 ವರ್ಷಗಳ ರಾಜಕೀಯ ಬದುಕಿನಲ್ಲಿ ಈ ಬಾರಿಯಷ್ಟು ಹೊಸ ಮುಖ ಮತ್ತು ಯುವಕರನ್ನು ಮೊದಲು ಯಾವತ್ತೂ ನೋಡಿರಲಿಲ್ಲವಂತೆ!