ಎಂಇಎಸ್ ನವರು ಪ್ರತಿಭಟನೆ ನಡೆಸೋದು ಹೊಸದೇನಲ್ಲ, ಪ್ರತಿವರ್ಷ ಅದನ್ನು ಮಾಡುತ್ತಾರೆ. ಅನುಮತಿ ಇಲ್ಲದೆ ಪ್ರತಿಭಟನೆ ನಡೆಸುವುದರಿಂದ ಪೊಲೀಸರು ಕೇಸ್ ಹಾಕುತ್ತಾರೆ, ಕೆಲವರ ಬಂಧನವಾಗುತ್ತದೆ ಮತ್ತು ಬೇಲ್ ಪಡೆದು ಹೊರಬರುತ್ತಾರೆ ಎಂದು ಸಚಿವ ಹೇಳಿದರು. ಇವರೆಲ್ಲ ಬೆಳಗಾವಿಯಲ್ಲೇ ಜೀವನ ನಡೆಸುವುದರಿಂದ ವಿಷಯ ಅರ್ಥಮಾಡಿಕೊಳ್ಳಬೇಕು, ಪುಂಡಾಟ ಸರಿಯಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದರು.