ಯಾವುದೇ ಸಂತ್ರಸ್ತನಿಗೆ ಅನ್ಯಾಯವಾಗಕೂಡದು, ಸಹಾಯ ಧನವನ್ನು ಸರ್ಕಾರ ನೀಡುತ್ತಿದೆ, ನಿಮ್ಮ ಸಂಬಳದಿಂದ ಅಲ್ಲ, ಹಾಗಾಗಿ ಸರ್ಕಾರ ಮಂಜೂರು ಮಾಡಿರುವ ನೆರವನ್ನು ತೊಂದರೆಗೀಡಾಗಿರುವವರಿಗೆ ಪ್ರಾಮಾಣಿಕವಾಗಿ ತಲುಪಿಸಬೇಕು ಎಂದು ಪಾಟೀಲ್ ತಾಕೀತು ಮಾಡಿದರು.