ಕೊಲ್ಲೂರಿಗೇ ಬಂದು ವಿಜಯಲಕ್ಷ್ಮೀ ಅವರು ನವ ಚಂಡಿಕಾ ಹೋಮ ಮಾಡಿಸಿದ್ದೇಕೆ?

ವಿಜಯಲಕ್ಷ್ಮೀ ಅವರು ಪತಿ ದರ್ಶನ್ ಅವರನ್ನು ಜೈಲಿನಿಂದ ಹೊರಕ್ಕೆ ಕರೆತರಲು ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಅದು ಸಾಧ್ಯವಾಗುತ್ತಿಲ್ಲ. ಇದು ಅವರನ್ನು ಸಾಕಷ್ಟು ಚಿಂತೆಗೀಡು ಮಾಡಿದೆ. ಹೀಗಾಗಿ ವಿಜಯಲಕ್ಷ್ಮೀ ಬೇರೆ ಬೇರೆ ದೇವರ ಮೊರೆ ಹೋಗುತ್ತಿದ್ದಾರೆ. ಜೂನ್ 25ರಂದು ಅವರು ಕೊಲ್ಲುರೂ ದೇವಸ್ಥಾನಕ್ಕೆ ತೆರಳಿದ್ದರು. ಇಂದು (ಜುಲೈ 26) ಅವರು ನವಚಂಡಿಕಾ ಯಾಗ ಮಾಡಿಸಿದ್ದಾರೆ. ಆಶಾಢಮಾಸದಲ್ಲಿ ಈ ಪೂಜೆ ಮಾಡಿಸಿರೋದು ಮುಖ್ಯ ಆಗುತ್ತದೆ. ಸಂಕಷ್ಟ ನಿವಾರಣೆ ಈ ಪೂಜೆ ಮಾಡಿಸುತ್ತಾರೆ. ಬೆಳಿಗ್ಗೆ 6.30 ಸುಮಾರಿಗೆ ಪೂಜೆ ಆರಂಭ ಆಗಿದ್ದು, 9.30 ವೇಳೆಗೆ ಪೂಜೆ ಮುಗಿದಿದೆ. ಸಂಕಷ್ಟ ಸಮಯದಲ್ಲಿ ಈ ಪೂಜೆಯನ್ನು ಇಲ್ಲಿ ಮಾಡಿಸಿದ್ದಾರೆ.