ಕಲಬುರಗಿಯಲ್ಲಿ ಆರ್ ಅಶೋಕ

ಅಸಲಿಗೆ ರೈತರಿಗೆ ಪರಿಹಾರ ಒದಗಿಸಲು ಬೊಕ್ಕಸದಲ್ಲಿ ಹಣವೇ ಇಲ್ಲ, ಇದ್ದಬದ್ದ ಹಣವನ್ನೆಲ್ಲ ಪ್ರೀ ಫ್ರೀ ಅನ್ನುತ್ತಾ ಗ್ಯಾರಂಟಿ ಯೋಜೆನೆಗಳಿಗೆ ಹಂಚಿಬಿಟ್ಟಿದ್ದಾರೆ ಎಂದು ಅಶೋಕ ಹೇಳಿದರು. ಗ್ಯಾರಂಟಿ ಯೋಜನೆಗಳಲ್ಲೂ ಜನರಿಗೆ ಹಣ ತಲುಪುತ್ತಿಲ್ಲ, ಬಿಪಿಎಲ್ ಕಾರ್ಡ್ ಹೊಂದಿರುವವರು ರಾಜ್ಯದಲ್ಲಿ 1.20 ಕೋಟಿಗೂ ಹೆಚ್ಚಿದ್ದರೆ ಗೃಹ ಲಕ್ಷ್ಮಿ ಯೋಜನೆ ಅಡಿ ಕೇವಲ 70 ಲಕ್ಷ ಜನರಿಗೆ ಮಾತ್ರ ಹಣ ಸಿಕ್ಕಿದೆ ಎಂದು ಮಾಜಿ ಸಚಿವ ಹೇಳಿದರು.