ಅದರೆ ಪತ್ರಕರ್ತರು ಬಿಡಬೇಕಲ್ಲ? ಮೇಡಂ, ಕುಮಾರಸ್ವಾಮಿ ಹೇಳಿಕೆಯನ್ನು ಖಂಡಿಸ್ತೀರಾ ಸ್ವಾಗತಿಸುತ್ತೀರಾ ಅಂತ ಮತ್ತೊಮ್ಮೆ ಕೇಳಿದಾಗ ಬೇರೆ ದಾರಿ ಕಾಣದ ಅವರು, ಕುಮಾರಸ್ವಾಮಿಯವರು ಮಹಿಳೆಯರ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದಾರೆ, ಅದರೆ ಅವರು ಹೇಳಿದ ಮಾತುಗಳಿಗೆ ತಪ್ಪು ಅರ್ಥ ಕಲ್ಪಿಸಲಾಗುತ್ತಿದೆ, ಕಾಂಗ್ರೆಸ್ ನಾಯಕರು ಅವರ ಹೇಳಿಕೆಯನ್ನು ತಿರುಚಿ ಹೇಳುತ್ತಿದ್ದಾರೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.