ವಕ್ಫ್ ಕಾಯ್ದೆ ಬಗ್ಗೆ ಮಾತಾಡಿದ ರವಿ, ದೇಶದ ನ್ಯಾಯಾಂಗಕ್ಕೂ ಮೀರಿದ ಪರಮಾಧಿಕಾರವನ್ನು ಹಿಂದಿನ ಕಾಂಗ್ರೆಸ್ ಸರ್ಕಾರಗಳು ವಕ್ಫ್ ಮಂಡಳಿಗೆ ನೀಡಿವೆ, ಅದರ ನಿರ್ಣಯಗಳನ್ನು ಭಾರತದ ಯಾವುದೇ ಕೋರ್ಟ್ ಪ್ರಶ್ನಿಸುವಂತಿಲ್ಲ! ಪ್ರಾಯಶಃ ಮೊಹಮ್ಮದ್ ಜಿನ್ನಾ ಭಾರತದಲ್ಲಿ ವಾಸವಾಗಿದ್ದರೂ ಇದನ್ನು ಒಪ್ಪುತ್ತಿರಲಿಲ್ಲ, ಕೇವಲ ಮುಸಲ್ಮಾನರ ವೋಟು ಪಡೆಯಲು ಕಾಂಗ್ರೆಸ್ ಸೃಷ್ಟಿಸಿದ ಸನ್ನಿವೇಶವಿದು ಎಂದು ಹೇಳಿದರು.