ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜೊತೆ ನರಕವಾಸಿಗಳ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ

ಮಾತಿಗೆ ನಿಂತರೆ ಚೈತ್ರಾ ಕುಂದಾಪುರ ಅವರು ಎಲ್ಲರಿಗೂ ತಿರುಗೇಟು ನೀಡುತ್ತಾರೆ. ನರಕದಲ್ಲಿ ಇರುವ ಅವರು ಹತ್ತಾರು ತಂತ್ರಗಾರಿಕೆ ಮಾಡುತ್ತಿದ್ದಾರೆ. ‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಮೊದಲ ವಾರದಲ್ಲಿ ಸಾಕಷ್ಟು ಕಿರಿಕ್​ಗಳು ನಡೆದಿವೆ. ‘ನರಕದವರು ಕೀ ಕಿತ್ತುಕೊಂಡರೆ ನೀರು ಕೂಡ ಕೊಡಲ್ಲ. ಸ್ಟೋರ್​ ರೂಮ್​ನಿಂದ ಊಟವನ್ನೂ ಕೊಡಲ್ಲ’ ಎಂದು ಉಗ್ರಂ ಮಂಜು ಸವಾಲು ಹಾಕಿದ್ದಾರೆ. ಇದರಿಂದ ದೊಡ್ಡ ಜಗಳ ಆದರೂ ಅಚ್ಚರಿ ಏನಿಲ್ಲ. ಸ್ವರ್ಗದಲ್ಲಿ 10 ಜನ, ನರಕದಲ್ಲಿ 7 ಜನ ಇದ್ದಾರೆ. ‘ಕಲರ್ಸ್​ ಕನ್ನಡ’ ವಾಹಿನಿ ಹಾಗೂ ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ಶೋ ವೀಕ್ಷಿಸಬಹುದು.