ಎಂಬಿ ಪಾಟೀಲ್, ಸಚಿವ

ಕೇಸರಿ ಬಿಜೆಪಿಯವರ ಸ್ವತ್ತಲ್ಲ, ಎಲ್ಲ ಹಿಂದೂ ದೇವಸ್ಥಾನಗಳ ಮೇಲೆ ಕೇಸರಿ ಧ್ವಜವಿರುತ್ತದೆ, ಮಠಮಾನ್ಯಗಳಲ್ಲಿ ಕೇಸರಿ ಬಾವುಟಗಳಿರುತ್ತವೆ, ನಾವೆಲ್ಲ ಮನೆಗಳಲ್ಲಿ ಪೂಜೆ ಮಾಡುವಾಗ ಕೇಸರಿ ಬಟ್ಟೆಯನ್ನು ಇಟ್ಟುಕೊಂಡಿರುತ್ತೇವೆ, ಕೇಸರಿ ಶಲ್ಯ ಹೆಗಲ ಮೇಲೆ ಹಾಕಿಕೊಂಡಿರುತ್ತೇವೆ, ಹಾಗಾಗಿ ಕೇಸರಿ ಶಲ್ಯ, ಕೇಸರಿ ಬಾವುಟ ಬಿಜೆಪಿಯವರ ಸೊತ್ತಲ್ಲ ಎಂದು ಸಚಿವ ಎಂಬಿ ಪಾಟಿಲ್ ಹೇಳಿದರು.