ಸಿದ್ದರಾಮಯ್ಯ ಮತ್ತು ಸಚಿವ ಸಂತೋಷ್ ಲಾಡ್ ಉಗ್ರರನ್ನು ಮನೆ ಹೊಕ್ಕು ಹೊಡೆಯಬೇಕು ಅಂತ ಹೇಳಿದ್ದಾರೆ, ಅವರ ಮಾತಿಗೆ ಸ್ವಾಗತವಿದೆ, ಅದರೆ ಎರಡನೇ ಬಾರಿ ಸಚಿವರಾಗಿರುವ ಲಾಡ್ ನಿನ್ನೆ ಮೈಸೂರಲ್ಲಿ, ಕಾಶ್ಮೀರಿಗಳ ಮೇಲೆ ಅತ್ಯಾಚಾರ ನಡೆದಿದೆ ಅಂತ ಹೇಳಿದ್ದಾರೆ, ಅವರ ಮಾತಿನ ಅರ್ಥವೇನು? ಪದಗಳ ಬಳಕೆಯನ್ನು ಬಹಳ ಎಚ್ಚರಿಕೆಯಿಂದ ಮಾಡಬೇಕೆನ್ನುವ ಅರಿವು ಸಚಿವನಿಗಿಲ್ಲವೇ ಎಂದು ರೇಣುಕಾಚಾರ್ಯ ಕೇಳಿದರು.