ಮತ್ತೊಂದು ಸ್ವಾಗತಕಾರಿ ಬೆಳವಣಿಗೆಯೆಂದರೆ, ಚಿತ್ರನಟ ಯಶ್ ಸೂರಣಗಿ ಗ್ರಾಮಕ್ಕೆ ಇವತ್ತೇ ಭೇಟಿ ನೀಡಲಿದ್ದು, ಹಣಮಂತು, ನವೀನ್ ಮತ್ತು ಮುರಳಿಯವರ ಕುಟುಂಬಗಳೊಂದಿಗೆ ಮಾತಾಡಲಿದ್ದಾರೆ. ನಟನ ಆಪ್ತರು ಪಯಾಣದ ವ್ಯವಸ್ಥೆ ಮಾಡಿದ್ದಾರೆ, ಮತ್ತು ಅವರು ನೀಡಿರುವ ಸುಳಿವಿನ ಪ್ರಕಾರ ಮೂರು ಕುಟುಂಬಗಳಿಗೂ ನಟ ಧನ ಸಹಾಯ ಮಾಡಲಿದ್ದಾರೆ.