ದೆಹಲಿಗೆ ಬಂದಿರುವ ವಿಷಯವನ್ನು ಹೇಳಿದ ರೇವಣ್ಣ, ಹಾಸನ ರಿಂಗ್ ರೋಡ್ ಯೋಜನೆ ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿತ್ತು, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ದೇವೇಗೌಡ ಮತ್ತು ಕುಮಾರಸ್ವಾಮಿಯರೊಂದಿಗೆ ಭೇಟಿಯಾಗಿ ಹಣ ಮಂಜೂರು ಮಾಡಿಸಿಕೊಂಡಿದ್ದೇವೆ, ಜಿಲ್ಲೆಯಲ್ಲಿ 5 ರೇಲ್ವೇ ಯೋಜನೆಗಳ ಸಲುವಾಗಿ ರೇಲ್ವೇ ಸಚಿವರನ್ನು ಭೇಟಿಯಾಗಿದ್ದೇವೆ ಎಂದು ಹೇಳಿದರು.