ಶಿವಕುಮಾರ್ ಮನೆಬಳಿ ಪರಮೇಶ್ವರ

ಯಾವ ವಿಚಾರಗಳ ಬಗ್ಗೆ ಅವರ ನಡುವೆ ಚರ್ಚೆ ನಡೆಯಿತು ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. ಮನೆಯಿಂದ ಇಬ್ಬರು ನಾಯಕರು ಒಟ್ಟಿಗೆ ಹೊರಬಂದರಾದರೂ ಹೊರಗಡೆ ಕಾಯುತ್ತಿದ್ದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಯಾರೂ ಮಾತಾಡಲಿಲ್ಲ. ಪತ್ರಕರ್ತರು ಗೃಹ ಸಚಿವರ ಕಾರಿನ ಬಳಿಗೋಡಿದ್ದು ನಿಜ, ಆದರೆ ಅವರು ಧಾವಂತದಲ್ಲಿದ್ದಂತೆ ಕಂಡರು.