ಅಪಾಯಕಾರಿ ತಿರುವುಗಳಿರುವ ರಸ್ತೆಯ ಭಾಗಗಳಲ್ಲಿ ತಡೆಗೋಡೆ, ಬ್ಯಾರಿಕೇಡ್ ಗಳನ್ನು ನಿರ್ಮಿಸದಿರುವುದು ಮತ್ತು ಸೂಚನಾಫಲಕಗಳನ್ನು ನೆಡದಿರುವುದೇ ಕಾರಣ ಎಂದು ಪುಟ್ಟರಾಜು ಹೇಳಿದರು. ತಾನು ಜಿಲ್ಲಾಧಿಕಾರಿಯೊಂದಿಗೆ ಮಾತಾಡಿರುವುದಾಗಿ ಹೇಳಿದ ಮಾಜಿ ಸಚಿವರು ಮೃತರ ಕುಟುಂಬಗಳಿಗೆ ತಾತ್ಕಾಲಿಕ ಪರಿಹಾರವಾಗಿ ತಲಾ 10 ಲಕ್ಷ ರೂ. ಪರಿಹಾರ ಧನ ಕೂಡಲೇ ಬಿಡುಗಡೆ ಮಾಡುವಂತೆ ತಿಳಿಸಿರುವುದಾಗಿ ಹೇಳಿದರು.