ಮುನಿರತ್ನ ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಸಿದ್ದರಾಮಯ್ಯನವರ ಆಪ್ತರಲ್ಲಿ ಒಬ್ಬರಾಗಿದ್ದರು. ನಂತರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ದೋಸ್ತಿ ಮುರಿದು ಬಿತ್ತು. ಅದರೆ, ಶಿವಕುಮಾರ್ ಹಳೆಯದನ್ನು ನೆನಪಿಗೆ ತಂದುಕೊಳ್ಳದೆ ಮುನಿರತ್ನ ಜೊತೆ ಸಲುಗೆ ಹಾಗೂ ಆತ್ಮೀಯತೆಯಿಂದ ಮಾತಾಡಿದರು. ರಾಜರಾಜೇಶ್ವರಿ ನಗರದ ಎಲ್ಲ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡುವ ಭರವಸೆಯನ್ನು ಅವರು ಮುನಿರತ್ನಗೆ ನೀಡಿದ್ದಾರಂತೆ.