ಅರ್ಜುನ ಆನೆಯ ಸಮಾಧಿ ವಿಚಾರ: ಅರಣ್ಯಾಧಿಕಾರಿಗಳ ನಡೆಗೆ ದರ್ಶನ್​ ಆಪ್ತರು ಗರಂ

ಅರ್ಜುನ ಆನೆ ಸಮಾಧಿ ನಿರ್ಮಾಣಕ್ಕೆ ದರ್ಶನ್​ ಅವರು ಮುಂದಾಗಿದ್ದು, ಧನಸಹಾಯ ಮಾಡಿದ್ದಾರೆ. ಆದರೆ ಈ ವಿಚಾರದಲ್ಲಿ ಅರಣ್ಯಾಧಿಕಾರಿಗಳು ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ದರ್ಶನ್​ ಆಪ್ತರಾದ ನಾಗರಾಜ್​ ಮಾತನಾಡಿದ್ದಾರೆ. ‘ನಾನು ದರ್ಶನ್​ ಅವರ ಸ್ನೇಹಿತ ನಾಗರಾಜ್​. ದರ್ಶನ್​ ಅವರ ಪರವಾಗಿ ಮಾತನಾಡುತ್ತಿದ್ದೇನೆ. ದರ್ಶನ್​ ಅವರು ಅನಧಿಕೃತವಾಗಿ ಕಲ್ಲುಗಳನ್ನು ಮತ್ತು ಹುಡುಗರನ್ನು ಕಳಿಸಿದ್ದಾರೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದೀರಲ್ಲ.. ಮಾಧ್ಯಮಗಳಲ್ಲಿ ನೋಡಿ ಪ್ರಸಾರ ಆಗಿದೆ. ಮೇ 2ರಂದು ದರ್ಶನ್​ ಅವರು ಅರ್ಜುನನ ಸಮಾಧಿ ಬಗ್ಗೆ ಒಂದು ಟ್ವೀಟ್​ ಮಾಡಿದ್ದರು. ಆ ಬಳಿಕ ಸರ್ಕಾರ, ಅರಣ್ಯ ಇಲಾಖೆ, ಅಧಿಕಾರಿಗಳು ಕ್ರಮ ತೆಗೆದುಕೊಳ್ಳಲಿಲ್ಲ. ಆದರೆ ಮಾವುತ ವಿನು ಮತ್ತು ಹುಡುಗರು ಎಎಸ್​ಎಫ್​ ಅವರಿಗೆ ಮನವಿ ಮಾಡಿಕೊಂಡು ಅನುಮತಿ ಪಡೆದರು. ಆ ಬಳಿಕ ದರ್ಶನ್​ ಅವರು ಹಣ ನೀಡಿ ನಮಗೆ ಕಲ್ಲುಗಳ ವ್ಯವಸ್ಥೆ ಮಾಡಿದರು. ಆ ಬಳಿಕವೇ ನಾವು ಕಾಡಿನ ಒಳಗೆ ಹೋಗಿದ್ದು. ಕೆಲಸ ಶುರುಮಾಡಿದಾಗ ಆರ್​ಎಫ್​ಓ ಅವರು ತಡೆದಿದ್ದೀರಿ. ಹಣ ವಾಪಸ್​ ಕೊಟ್ಟಿದ್ದೇವೆ ಅಂತ ನೀವು ಹೇಳುತ್ತಿದ್ದೀರಿ. ಆದರೆ ಅದು ಯಾವ ಖಾತೆಗೂ ಬಂದಿಲ್ಲ. ಆ ಹಣದ ಅವಶ್ಯಕತೆ ದರ್ಶನ್​ ಅವರಿಗೆ ಇಲ್ಲ. ತಾಯಿ ಚಾಮುಂಡೇಶ್ವರಿ ಅವರನ್ನು ಚೆನ್ನಾಗಿ ಇಟ್ಟಿದ್ದಾರೆ’ ಎಂದು ನಾಗರಾಜ್​ ಹೇಳಿದ್ದಾರೆ.