ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಎಸ್ ಯಡಿಯೂರಪ್ಪ ಜೆಡಿಎಸ್ ಪಕ್ಷದಿಂದ ಬಿಜೆಪಿಗೆ ಕರೆತರುವಾಗ ಜಗದೀಶ್ ಶೆಟ್ಟರ್ ನಕರಾತ್ಮಕ ಅಭಿಪ್ರಾಯ ನೀಡಿದ್ದರು ಎಂಬ ಇದುವರೆಗೆ ನಿಗೂಢವಾಗಿದ್ದ ರಹಸ್ಯವನ್ನು ರೇಣುಕಾಚಾರ್ಯ ಬಹಿರಂಗಗೊಳಿಸಿದರು. ತಮ್ಮ ಅಭ್ಯಂತರವಿಲ್ಲ ಆದರೆ ಮುಂದಾಗಬಹುದಾದ ಅನಾಹುತಗಳ ಬಗ್ಗೆ ಯೋಚನೆ ಮಾಡಿ ಎಂದು ಶೆಟ್ಟರ್, ಯಡಿಯೂರಪ್ಪಗೆ ಹೇಳಿದ್ದರಂತೆ.