ಶಿವಮೊಗ್ಗದಲ್ಲಿಂದು ಬೆಂಬಲಿಗರು ಮತ್ತು ಪದವೀಧರ ಮತದಾರರನ್ನು ಉದ್ದೇಶಿಸಿ ಮಾತಾಡಿದ ಈಶ್ವರಪ್ಪ ಪಕ್ಷದ ವ್ಯವಹಾರಗಳಲ್ಲಿ ಬಿಎಸ್ ಯಡಿಯೂರಪ್ಪ ಕುಟುಂಬ ಏಕಸ್ವಾಮ್ಯ ಮೆರೆಯುತ್ತಿದ್ದು ಮೊದಲಿದ್ದ ಸಾಮೂಹಿಕ ನಾಯಕತ್ವ ಕಾಣೆಯಾಗಿದೆ ಎಂದರು. ಇದನ್ನೇ ಬದಲಾಯಿಸಬೇಕು ಎಂದು ತಾನು ಮತ್ತು ರಘುಪತಿ ಭಟ್ ಪಣತೊಟ್ಟಿರುವುದಾಗಿ ಅವರು ಹೇಳಿದರು.