ಹುಬ್ಳಳ್ಳಿ ಗಲಭೆ ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರಕರಣ ಹಿಂಪಡೆಯುವಂತೆ ಸೂಚಿಸಿ ಪತ್ರ ಬರೆದಿರುವ ಬಗ್ಗೆ ಕೇಳಿದಾಗ ಸಚಿವ ಪರಮೇಶ್ವರ್, ಆದು ಹಾಗಲ್ಲ ಆದಕ್ಕಾಗಿ ಒಂದು ಸಮಗ್ರ ಪ್ರಕ್ರಿಯೆ ನಡೆಯಬೇಕಾಗುತ್ತದೆ; ಶಾಸಕರು ಅಥವಾ ಸಚಿವರು ಹಾಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದಾಗ ಅವರು ನನಗೆ ತಿಳಿಸುತ್ತಾರೆ, ನಾನು ಪ್ರಸ್ತಾಪವನ್ನು ಸಂಪುಟದ ಉಪ ಸಮಿತಿಯ ಮುಂದಿಡುತ್ತೇನೆ ಎಂದರು.