ಗುಜರಾತ್​ನ ವಂತಾರದಲ್ಲಿ ಸಿಂಹದ ಮರಿಗೆ ಹಾಲು ಕುಡಿಸಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಭಾನುವಾರ ಜಾಮ್‌ನಗರದಲ್ಲಿ ವಂತಾರ ಪ್ರಾಣಿ ರಕ್ಷಣಾ ಮತ್ತು ಪುನರ್ವಸತಿ ಕೇಂದ್ರವನ್ನು ಉದ್ಘಾಟಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ಗೆ ಮೂರು ದಿನಗಳ ಪ್ರವಾಸದಲ್ಲಿದ್ದರು. ಇದೇ ವೇಳೆ ವಂತಾರದಲ್ಲಿರುವ ವನ್ಯಜೀವಿ ಆಸ್ಪತ್ರೆಗೆ ಪ್ರಧಾನಿ ಭೇಟಿ ನೀಡಿದರು. ಇದು MRI, CT ಸ್ಕ್ಯಾನ್‌ಗಳು ಮತ್ತು ICUಗಳು ಸೇರಿದಂತೆ ವಿವಿಧ ಸೌಲಭ್ಯಗಳನ್ನು ಹೊಂದಿದೆ. ಆಸ್ಪತ್ರೆಯಲ್ಲಿ ವನ್ಯಜೀವಿ ಅರಿವಳಿಕೆ, ಹೃದಯಶಾಸ್ತ್ರ, ಮೂತ್ರಪಿಂಡಶಾಸ್ತ್ರ, ಎಂಡೋಸ್ಕೋಪಿ, ದಂತಚಿಕಿತ್ಸೆ, ಆಂತರಿಕ ಔಷಧ ಇತ್ಯಾದಿ ಸೇರಿದಂತೆ ಬಹು ವಿಭಾಗಗಳಿವೆ.