ಈ ವರ್ಷ ಮುಂಗಾರು ಮಳೆಯ ಅಬ್ಬರ ಅವಧಿಗೂ ಮುನ್ನವೇ ಕೆಆರ್ಎಸ್ ಡ್ಯಾಂ ಭರ್ತಿಯಾಗುವತ್ತ ಕೊಮಡೊಯ್ದಿದೆ. ಪರಿಣಾಮವಾಗಿ ಡ್ಯಾಂ ಭರ್ತಿಯಾಗಲು ಇನ್ನು 7 ಅಡಿ ಅಷ್ಟೇ ಬಾಕಿ ಇದೆ. ಹೀಗಾಗಿ ಡ್ಯಾಂನಿಂದ ನದಿಗೆ ನೀರು ಬಿಡುವ ಸಂದರ್ಭ ಬರುವ ಮುನ್ಸೂಚನೆ ಇದ್ದು, ಕಾವೇರಿ ನದಿ ಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಎಚ್ಚರಿಕೆ ನೀಡಲಾಗಿದೆ.