ಇಕ್ಬಾಲ್ ಹುಸ್ಸೇನ್ ಅವರು ಶಿವಕುಮಾರ್ ಬಣದವರು ಮತ್ತು ರಾಜಣ್ಣ ಅವರು ಸಿದ್ದರಾಮಯ್ಯ ಬಣದವರು ಅಂತ ಕನ್ನಡಿಗರಿಗೆ ಗೊತ್ತಿಲ್ಲದೇನಿಲ್ಲ, ಆದರೆ ಕೆಪಿಸಿಸಿ ಅಧ್ಯಕ್ಷನ ಬದಲಾವಣೆ ಅಥವಾ ಅಧಿಕಾರ ಹಂಚಿಕೆಯ ವಿಷಯ ಪ್ರಸ್ತಾಪವಾದಾಗ ರಾಜಣ್ಣ ತಮ್ಮ ಅಭಿಪ್ರಾಯ ಹೇಳಿದ ಬಳಿಕವೇ ಸುಮ್ಮನಾಗುತ್ತಾರೆ. ಇವತ್ತು ಬೆಳಗ್ಗೆಯಷ್ಟೇ ಕಡೂರು ಶಾಸಕ ಆನಂದ್ ಕೆಎಸ್ ರಾಜಣ್ಣನ ಧೋರಣೆ ಖಂಡಿಸಿದ್ದಾರೆ.