ಹಳ್ಳಿ ಮತ್ತು ನಗರ ಪ್ರದೇಶದ ಜೀವನಕ್ಕೆ ತುಲನೆ ಮಾಡಲಾಗಲ್ಲ, ಹಳ್ಳಿ ಬದುಕಿನ ಸೊಗಡೇ ಬೇರೆ, ಅಲ್ಲಿ ಕಷ್ಟವೂ ಇದೆ ಸುಖವೂ ಇದೆ, ಆದರೆ ನಗರದ ಜೀವನ ಯಥೇಚ್ಛವಾಗಿ ದುಡ್ಡಿರುವವರಿಗೆ ಚೆಂದ ಎಂದು ಹೇಳುವ ತಿಪ್ಪ ನಾಯಕ್ ಬ್ರಿಗೇಡ್ ರಸ್ತೆಯಲ್ಲಿ ಕಾಣುವ ವಿದ್ಯುತ್ ದೀಪಗಳ ಅಲಂಕಾರಕ್ಕಿಂತ ದಸರಾ ಸಮಯದಲ್ಲಿ ಮೈಸೂರು ಅರಮನೆಗೆ ಮಾಡುವ ವಿದ್ಯುದಲಂಕಾರ ಹತ್ತು ಪಟ್ಟು ಸೊಗಸಾಗಿರುತ್ತದೆ ಎನ್ನುತ್ತಾರೆ.