ಕೊರತೆ ಮಳೆಯಿಂದ ರೈತರಿಗೆ ಈ ವರ್ಷ ಎದುರಾಗಿರುವ ಸಂಕಷ್ಟದ ಬಗ್ಗೆ ಮಾತಾಡಿದ ಮುಖ್ಯಮಂತ್ರಿ, ರೈತ ಸಂತೋಷವಾಗಿದ್ದರೆ ಮಾತ್ರ ದೇಶ ಸಂತೋಷವಾಗಿರುತ್ತದೆ ಅವನು ಉದ್ಧಾರವಾದರೆ ದೇಶ ಉದ್ಧಾರವಾದಂತೆ, ಕೃಷಿಯಿಂದಲೇ ದೇಶದ ಜಿಡಿಪಿಗೆ ಹೆಚ್ಚಿನ ದೇಣಿಗೆ ಸಿಗುತ್ತದೆ ಎಂದು ಹೇಳುತ್ತಿದ್ದಂತೆಯೇ ಸಭಿಕರಲ್ಲಿ ಮತ್ತೊಬ್ಬ ವ್ಯಕ್ತಿ ‘ಹೌದಾ ಹುಲಿಯಾ’ ಅಂತ ಜೋರಾಗಿ ಅಬ್ಬರಿಸಿದ!